ಧಾರವಾಡಕ್ಕೆ ನೂತನ ಎಸಿ ಶ್ರೀಮತಿ ಪ್ರಭಾವತಿ ಪಕ್ಕಿರಪುರಗೆ ವಿಶೇಷ ಸ್ವಾಗತ

ಧಾರವಾಡಕ್ಕೆ ನೂತನ ಎಸಿ ಶ್ರೀಮತಿ ಪ್ರಭಾವತಿ ಪಕ್ಕಿರಪುರಗೆ ವಿಶೇಷ ಸ್ವಾಗತ

ಧಾರವಾಡ:- ಧಾರವಾಡ ಜಿಲ್ಲೆಯ ನೂತನ ಉಪವಿಭಾಗಾಧಿಕಾರಿ ಹಾಗೂ ವಿಭಾಗದಂಡಾಧಿಕಾರಿಯಾಗಿ ''ಶ್ರೀಮತಿ ಪ್ರಭಾವತಿ'' ಪಕ್ಕಿರಪುರ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.ಅಧಿಕಾರ ಸ್ವೀಕಾರದ ವೇಳೆ ರೈತರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹೂಗುಚ್ಛ ನೀಡಿ ಅಭಿನಂದಿಸಿದರು.

ಅಧಿಕಾರ ಸ್ವೀಕಾರದ ಬಳಿಕ ಕಚೇರಿಗೆ ಆಗಮಿಸಿದ ರೈತರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹೂಗುಚ್ಛ ನೀಡಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಶುಭ ಹಾರೈಸಿದರು.

ಆಡಳಿತ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವ ಶ್ರೀಮತಿ ಪ್ರಭಾವತಿ ಪಕ್ಕಿರಪುರ ಅವರು ಈ ಹಿಂದೆ ಬೈಲಹೊಂಗಲ ಉಪವಿಭಾಗಾಧಿಕಾರಿಯಾಗಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿ ಹಾಗೂ ಯಲ್ಲಮ್ಮನಗುಡ್ಡ ಪ್ರಾಧಿಕಾರದಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವ ವಿಶ್ವಾಸವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

ವರದಿ: ಯಲ್ಲಪ್ಪಗೌಡ ಕುಂದಗೋಳ